27 C
ಬೆಂಗಳೂರು
August 26, 2026
kranthikidi.com
ತಾಜಾಸುದ್ದಿಸಿನಿಮಾ

ಚೀನಾದಲ್ಲೂ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಫಿದಾ ಆದ ಪ್ರೇಕ್ಷಕರು..!

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬಜೆಟ್‌ನ ಮಹಾಕಾವ್ಯವಾಗಿ ಹೊರಹೊಮ್ಮುತ್ತಿದೆ. ಹಾಲಿವುಡ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಶೈಲಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಚೀನಾದಲ್ಲೂ ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’ ಟ್ರೇಲರ್ ಈಗ ಚೀನಾದಲ್ಲಿ ಸೃಷ್ಟಿಸಿರುವ ಕ್ರೇಜ್ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ. ಯೂಟ್ಯೂಬ್ ಹಾಗೂ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟ್ರೇಲರ್ ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಾರು ಚೀನಿ ಪ್ರೇಕ್ಷಕರು ಕಮೆಂಟ್ ಮಾಡುವ ಮೂಲಕ ಚಿತ್ರದ ಬೃಹತ್ ಕ್ಯಾನ್ವಾಸ್, ಅದ್ಭುತ ಗ್ರಾಫಿಕ್ಸ್ ಮತ್ತು ದೃಶ್ಯ ವೈಭವವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಹಲವರು ತಮ್ಮ ಸ್ವದೇಶಿ ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ದ ಮೇಕಿಂಗ್ ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚೀನಾದ ಪ್ರೇಕ್ಷಕರು ಭಾರತೀಯ ಸಿನಿಮಾವೊಂದರ ಈ ಮಟ್ಟದ ತಾಂತ್ರಿಕ ವೈಭವವನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಚೀನಾದ ಸೂಪರ್ ಹಿಟ್ ಸಿನಿಮಾಗಳಿಗೆ ಹೋಲಿಸಿದ ಅಲ್ಲಿನ ನೆಟ್ಟಿಗರೊಬ್ಬರು, ‘360 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾದ ನಮ್ಮ ಸಿನಿಮಾಗಿಂತಲೂ ರಾಮಾಯಣದ ಸ್ಪೆಷಲ್ ಎಫೆಕ್ಟ್ಸ್ ಅತ್ಯುತ್ತಮವಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, ‘ಕಳೆದ ಎರಡು ವರ್ಷಗಳಲ್ಲಿ ಬಂದ ನಮ್ಮ ದೇಶದ ಸಿನಿಮಾಗಳಿಗಿಂತ ಇದು ಹೇಗೆ ಇಷ್ಟೊಂದು ಅದ್ಭುತವಾಗಿ ಮೂಡಿಬಂದಿದೆ’ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಚೀನಾದ ಪೌರಾಣಿಕ ಕಥೆಗಳಿಗೆ ಅಲ್ಲಿನ ನಿರ್ದೇಶಕರು ಸೂಕ್ತ ಗೌರವ ನೀಡುತ್ತಿಲ್ಲ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಮ್ಮ ನಿರ್ದೇಶಕರಿಗೆ ಸ್ವದೇಶಿ ಪುರಾಣಗಳ ಮೇಲೆ ಗೌರವವಿಲ್ಲ, ಆದ್ದರಿಂದಲೇ ನಮಗೆ ಇಂತಹ ದೃಶ್ಯ ವೈಭವದ ಕಾವ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ಇದೇ ರೀತಿ ಹಲವಾರು ಕಮೆಂಟ್​ಗಳು ಬರುತ್ತಿವೆ.

ಕೆಲವು ವೀಕ್ಷಕರು ಈ ಚಿತ್ರದ ತಾಂತ್ರಿಕತೆಯನ್ನು ಹಾಲಿವುಡ್‌ನ ಪ್ರಸಿದ್ಧ ‘ಲೆಜೆಂಡರಿ ಎಂಟರ್‌ಟೈನ್‌ಮೆಂಟ್’ ನಿರ್ಮಾಣದ ಸಿನಿಮಾಗಳಿಗೆ ಹೋಲಿಸಿದ್ದಾರೆ. ‘300’, ‘ಗಾಡ್ಜಿಲ್ಲಾ’, ‘ಜುರಾಸಿಕ್ ವರ್ಲ್ಡ್’ ರೀತಿಯ ಸಿನಿಮಾಗಳ ಗುಣಮಟ್ಟ ರಾಮಾಯಣದಲ್ಲಿ ಕಾಣುತ್ತಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ‘ರಾಮಾಯಣದ ಮೇಕಿಂಗ್ ಲೆಜೆಂಡರಿ ಸಂಸ್ಥೆಯ ಸಿನಿಮಾಗಳಿಗಿಂತ ಉತ್ತಮವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರೆ. ಇನ್ನು ಕೆಲವರು ರಾಮಾಯಣವನ್ನು ‘ಭಾರತದ ಆಡಸ್ಸಿ’ ಎಂದು ಬಣ್ಣಿಸಿದ್ದಾರೆ.

ಈ ಎರಡು ಭಾಗಗಳ ಪೌರಾಣಿಕ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಯಶ್ ಅವರು ನಮಿತ್ ಮಲ್ಹೋತ್ರಾ ಅವರೊಂದಿಗೆ ಈ ಚಿತ್ರದ ಸಹ-ನಿರ್ಮಾಪಕರಾಗಿಯೂ ಪಾಲುದಾರಿಕೆ ಹೊಂದಿದ್ದಾರೆ. ಜೊತೆಗೆ ಸನ್ನಿ ಡಿಯೋಲ್, ರವಿ ದುಬೆ, ಅರುಣ್ ಗೋವಿಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್ ಹಾಗೂ ಕುನಾಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದನ್ನೂ ಓದಿ : ನೈಸ್ ಯೋಜನೆ ಬಗ್ಗೆ ಹೆಚ್‌ಡಿಕೆ ಪತ್ರಕ್ಕೆ ಸಿಎಂ ಡಿಕೆಶಿ ಪ್ರತಿಕ್ರಿಯೆ..!

Related posts

ಅಧಿಕಾರ ಕೊಟ್ಟವರು ಮುಖ್ಯಮಂತ್ರಿಗಳು, ಅವ್ರು ಹೇಳಿದ ಹಾಗೆ ಕೇಳ್ತೀನಿ; ಬಾಲಕೃಷ್ಣ

kknewskannada1987@gmail.com

ಮೌಂಟ್ ಎವರೆಸ್ಟ್ ಏರಿದ ಬೆಂಗಳೂರಿನ ಪರ್ವತಾರೋಹಿಗಳು…!

Kalpana Editor

ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಠರಾವು ರದ್ದು..!

Kalpana Editor