August 27, 2026
kranthikidi.com
ತಾಜಾಸುದ್ದಿರಾಜ್ಯ

ತಮಿಳುನಾಡಿಗೆ ನೀರು ಬೀಡಲು ಆದೇಶ; ಚರ್ಚೆ ಮಾಡಿ ತೀರ್ಮಾನ – ಸಿಎಂ

ಬೆಂಗಳೂರು : ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಬಿಡುವ CWRC ಆದೇಶದ ಬಗ್ಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, 12 ಸಾವಿರ ಕ್ಯೂಸೆಕ್ ನೀರು ಬಿಡುವ ಆದೇಶ ಬಗ್ಗೆ ಗಮನಕ್ಕೆ ಬಂದಿದೆ. ನಮ್ಮ ಒಳಹರಿವು ಎಷ್ಟಿದೆ ಅಂತ ನೋಡ್ತಾ ಇದ್ದೀನಿ. ನಮ್ಮ ಪರಿಸ್ಥಿತಿ ‌ನೋಡಿಕೊಂಡು ನಮ್ಮ ರೈತರನ್ನ ಕಾಪಾಡೋ ಕರ್ತವ್ಯವಿದೆ.

ರೈತರನ್ನು ಕಾಪಾಡಬೇಕು. ಕೋರ್ಟ್ ಆದೇಶ ಕೂಡಾ ಪಾಲನೆ ಮಾಡಬೇಕು. ಇವೆರಡನ್ನು ಗಮನದಲ್ಲಿಟ್ಟುಕೊಂಡು ನಮ್ಮ ನೀರಾವರಿ ಸಚಿವರು ಮಾತಾಡ್ತೀವಿ ಎಂದರು. ಈಗಾಗಲೇ ಹೇಳಿದ್ದೇವೆ. ಬೆಳೆಗೂ ತೊಂದರೆ ಆಗಬಾರದು. ಕಾವೇರಿ ಮಾತ್ರವಲ್ಲ ಎಲ್ಲಾ ಡ್ಯಾಂ ನೀರು ಗಮನದಲ್ಲಿಟ್ಟುಕೊಂಡು ಬೆಳೆ ಬಗ್ಗೆ ತೀರ್ಮಾನ ಮಾಡಿ ಅಂತ ಹೇಳಿದ್ದೇವೆ ಎಂದು ತಿಳಿಸಿದರು.

ನಾನು ಪಾರದರ್ಶಕವಾಗಿ ಇದ್ದೇನೆ. ಮಾಧ್ಯಮಗಳಲ್ಲಿ ನೀವು ತೋರುಸ್ತೀರಾ ಅಂತ ಮಾಡೋರು ಯಾರು ಹೋಗೊಲ್ಲ. ನೀರು ಹಿಡಿದಿಟ್ಟುಕೊಳ್ಳಲು ಆಗೊಲ್ಲ. ತಾಳ್ಮೆಯಿಂದ ಇರಿ. ನಿಮಗೋಸ್ಕರವೇ ನಾವು ಇರೋದು. ಜನ ಅಧಿಕಾರ ಕೊಟ್ಟಿರೋದು ರೈತರನ್ನು ಬದುಕಿಸಲು. ಯಾವ ರೈತರಿಗೆ ತೊಂದರೆ ಮಾಡೋ ಇಷ್ಟ ಇಲ್ಲ. ತಾಳ್ಮೆಯಿಂದ ಇರಿ. ಸೌಹಾರ್ದಯಿಂದ ಇರಿ. ಪ್ರಕೃತಿ ನಮ್ಮನ್ನ ಬದುಕಿಸುತ್ತದೆ ಎಂದು ಮನವಿ ಮಾಡಿದರು.

ನಾಳೆ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಲು ಸಚಿವರು, ಕೆಲವು ನಾಯಕರ ಸಭೆ ಕರೆದಿದ್ದೇನೆ. ಸಚಿವರು, ಲೀಡರ್ಸ್ ಸಭೆ ಕರೆದಿದ್ದೇನೆ. ನಮ್ಮ ಪಕ್ಷದ ಪ್ಲ್ಯಾನ್ ಆಫ್ ಆಕ್ಷನ್ ಬಗ್ಗೆ ಚರ್ಚೆಗೆ ಕರೆದಿದ್ದೇನೆ. ರಾಜಕೀಯವಾಗಿ ಏನು ಬರಬಹುದು. ಹೇಗೆ ಹ್ಯಾಂಡಲ್ ಮಾಡಬೇಕು ಅಂತ ಮೊದಲ ಸಭೆ ಮಾಡಿ ಮಾರ್ಗದರ್ಶನ ಕೊಡಬೇಕು. ಅದಕ್ಕೆ ಕರೆದಿದ್ದೇನೆ. ನಾಡಿದ್ದು ಕ್ಯಾಬಿನೆಟ್ ಸಭೆ ಇದೆ. ನಾಳೆ ಪೊಲಿಟಿಕಲ್ ಮೀಟಿಂಗ್ ಇದೆ ಎಂದು ಹೇಳಿದರು. ಇದನ್ನೂ ಓದಿ : ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಚೀನಾ ರಾಕೆಟ್‌ ಪತನ..!

Related posts

ಬಸ್ – ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ..!

Kalpana Editor

ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಮೇಲೆ ಅಮೆರಿಕ ದಾಳಿ ಮಾಡಿದೆ; ಇರಾನ್‌ ಆರೋಪ..!

Kalpana Editor

ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭ; ಸಂಭ್ರಮದಿಂದ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು

Kalpana Editor