August 25, 2026
kranthikidi.com
ತಾಜಾಸುದ್ದಿರಾಜ್ಯ

ಜೈಲಲ್ಲಿ ಮೊಬೈಲ್ ಬಳಕೆ ಆರೋಪ; ಪ್ರಜ್ವಲ್‌ಗೆ ಅಲೋಕ್ ಕುಮಾರ್ ʼಸ್ಪೆಷಲ್ ಕ್ಲಾಸ್ʼ..!

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸಿದ ಆರೋಪದ ಹಿನ್ನೆಲೆ ಡಿಜಿಪಿ ಅಲೋಕ್ ಕುಮಾರ್ ಅವರು ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲೇ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಬೇರೆ ಬ್ಯಾರಕ್‌ಗಳಿಗೆ ಸಾಮಾನ್ಯವಾಗಿ ಭೇಟಿ ನೀಡಿದ ಅವರು, ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮಾತ್ರ ಸುಮಾರು 10ರಿಂದ 12 ನಿಮಿಷಗಳ ಕಾಲ ವಿಶೇಷವಾಗಿ ಮಾತನಾಡಿದ್ದಾರೆ. ಈ ವೇಳೆ ಮೊಬೈಲ್ ಬಳಕೆ ವಿಚಾರಕ್ಕೆ ಅಲೋಕ್ ಕುಮಾರ್ ಅವರು ಪ್ರಜ್ವಲ್ ರೇವಣ್ಣ ಮೇಲೆ ಗರಂ ಆಗಿದ್ದಾರೆ. ಅವರಿಬ್ಬರ ನಡುವೆ ಇದೇ ವಿಚಾರಕ್ಕೆ ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ.

ಅಲೋಕ್ ಕುಮಾರ್ ಕೇಳಿದ್ದು – ಪ್ರಜ್ವಲ್ ರೇವಣ್ಣ ಹೇಳಿದ್ದು
ಅಲೋಕ್ ಕುಮಾರ್: ನಿನ್ನಿಂದ ಇಡೀ ಇಲಾಖೆ ಮರ್ಯಾದೆ ಹಾಳಾಗಿದೆ.
ಡಿಜಿಪಿ: ನನ್ನ ಕೆರಿಯರ್‌ನಲ್ಲಿ ನನಗೆ ಯಾವಾಗಲೂ ಇಷ್ಟು ಬೇಜಾರಾಗಿರಲಿಲ್ಲ. ನಾನು ನಿಮ್ಮಿಂದ ತಲೆ ತಗ್ಗಿಸುವಂತಾಯ್ತು.
ಡಿಜಿಪಿ: ಇನ್ಮುಂದೆ ಆದ್ರೂ ನೆಟ್ಟಗಿರಿ, ಜೈಲ್ ನಿಯಮಾವಳಿ ಪಾಲಿಸಬೇಕು.
ಪ್ರಜ್ವಲ್ ರೇವಣ್ಣ: ಇಲ್ಲ ಸಾರ್, ನಾನೇನು ಮಾಡಿಲ್ಲ ಸಾರ್.
ಪ್ರಜ್ವಲ್ ರೇವಣ್ಣ: ನಾನೇನು ಮಾಡಿಲ್ಲ ಸಾರ್.
ಡಿಜಿಪಿ: ನನಗೆಲ್ಲಾ ಗೊತ್ತಿದೆ, ಸಾಕು ನಿಲ್ಸಿ ನಿಮ್ ಡ್ರಾಮಾ. ನಿಮಗೆ ಮೊಬೈಲ್ ಕೊಟ್ಟವರಾರು..?
ಡಿಜಿಪಿ: ನೀವು ಹೇಳದಿದ್ರೆ ಬೇರೆ ಆ್ಯಕ್ಷನ್ ತಗೊಬೇಕಾಗುತ್ತೆ.
ಡಿಜಿಪಿ: ನೆಕ್ಸ್ಟ್ ಈ ರೀತಿ ಆದ್ರೆ, ಮೊಬೈಲ್ ಕಂಡುಬಂದ್ರೆ ನಾನು ಸುಮ್ಮನಿರೊಲ್ಲ ಎಂದ್ರು. ಇದನ್ನೂ ಓದಿ : ಹನೂರು ಪ್ರಕರಣ; ನ್ಯಾಯಾಂಗ ತನಿಖೆಗೆ ಆರ್​​. ಅಶೋಕ್​​ ಆಗ್ರಹ..!

Related posts

ಡಿಜಿಪಿ ಅನುರಾಗ್ ಧನಕರ್ ಶವವಾಗಿ ಪತ್ತೆ – ಕಚೇರಿಯಲ್ಲೇ ಆತ್ಮಹತ್ಯೆ ಶಂಕೆ..!

Kalpana Editor

ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ – ವಿಜಯೇಂದ್ರ

Kalpana Editor

ವಿಜಯ್, ಸಂಗೀತಾ‌ ವಿಚ್ಛೇದನ ಅರ್ಜಿ ವಿಚಾರಣೆ; ಪತ್ನಿ ಜೊತೆ ರಾಜಿ ಮಾಡ್ಕೊಳ್ತಾರಾ ದಳಪತಿ

Kalpana Editor