20.9 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿದೇಶ

ಅಯೋಧ್ಯೆ, ಬದರಿನಾಥ ಬಳಿಕ ಈಗ ವೈಷ್ಣೋದೇವಿಯಲ್ಲೂ ಅಕ್ರಮ..!

ಶ್ರೀನಗರ : ಅಯೋಧ್ಯೆ ರಾಮಮಂದಿರ ಹಾಗೂ ಬದರಿನಾಥ ದೇಗುಲ ದೇಣಿಗೆ ದುರುಪಯೋಗ ಪ್ರಕರಣದ ನಂತರ ಇದೀಗ ಜಮ್ಮುವಿನ ಕಟ್ರಾದಲ್ಲಿರುವ ವೈಷ್ಣೋದೇವಿ ದೇಗುಲದಲ್ಲಿ ಅಕ್ರಮ ಬೆಳಕಿಗೆ ಬಂದಿದೆ.

ರಾಮಮಂದಿರ ದೇಣಿಗೆ ಅಕ್ರಮದ ಬಳಿಕ ಬದರಿನಾಥ ದೇಗುಲದಲ್ಲಿಯೂ ತನಿಖೆಗೆ ಸಮಿತಿ ರಚಿಸಲಾಗಿದೆ. ಇದರ ನಂತರ ದೇಶದ ಹಲವು ದೇವಾಲಯಗಳು ತನಿಖಾ ವ್ಯಾಪ್ತಿಗೆ ಒಳಪಟ್ಟಿದ್ದು, ಇದೀಗ ವೈಷ್ಣೋದೇವಿ ದೇಗುಲದಲ್ಲಿ 530 ಕೋಟಿ ರೂ. ನಕಲಿ ಬೆಳ್ಳಿ ಹಗರಣ ನಡೆದಿರುವುದು ಪತ್ತೆಯಾಗಿದೆ.

ವೈಷ್ಟೋದೇವಿ ದೇವಸ್ಥಾನಕ್ಕೆ ಭಕ್ತರು ಅರ್ಪಿಸಿದ 530 ಕೋಟಿ ರೂ. ಮೌಲ್ಯದ ಬೆಳ್ಳಿಯಲ್ಲಿ ಬೃಹತ್ ಹಗರಣದ ಶಂಕೆ ವ್ಯಕ್ತವಾಗಿದೆ. ದೇಗುಲ ಮಂಡಳಿ ಪರೀಕ್ಷೆಗೆ ಸರ್ಕಾರಿ ಟಂಕಸಾಲೆಗೆ ಕಳುಹಿಸಿದ್ದ 20 ಟನ್ ಬೆಳ್ಳಿಯ ಪೈಕಿ ಶೇ.95ರಷ್ಟು ನಕಲಿ ಲೋಹ ಮಿಶ್ರಣವಾಗಿದ್ದು, 5%-6% ಮಾತ್ರ ಆಸಲಿ ಬೆಳ್ಳಿ ಆಗಿದೆ. ಜೊತೆಗೆ ವಿಷಕಾರಿ ಕ್ಯಾಡ್ಮಿಯಂ, ಕಬ್ಬಿಣದ ಮಿಶ್ರಣ ಪತ್ತೆಯಾಗಿದೆ ಎಂದು ತನಿಖೆ ವೇಳೆ ಬಯಲಾಗಿದೆ.

ಈ ಸಂಬಂಧ ತನಿಖೆಗೆ ವಿಳಂಬ ಮಾಡಿದ ಹಿನ್ನೆಲೆ ಕ್ರೈಂ ಬ್ರಾಂಚ್ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣವಾದ ದಾಖಲೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಮ್ಮು ನ್ಯಾಯಾಲಯದಿಂದ ಸೂಚನೆ ನೀಡಲಾಗಿದೆ. ವೈಷ್ಣೋದೇವಿ ದೇಗುಲದಲ್ಲಿ ಭಕ್ತರಿಂದ ಅರ್ಪಿತವಾದ ಬೆಳ್ಳಿಯೇ ನಕಲಿಯಾಗಿತ್ತೋ ಅಥವಾ ಟ್ರಸ್ಟ್‌ನಿಂದಲೇ ಆಕ್ರಮ ನಡೆದಿದೆಯೇ ಎಂಬುದು ವಿಚಾರಣೆಯ ಕೇಂದ್ರಬಿಂದುವಾಗಿದೆ. ಇದನ್ನೂ ಓದಿ : ‘ಟಾಕ್ಸಿಕ್’ ಸಿನಿಮಾದ ಹೊಸ ಹಾಡಿನ ಬಗ್ಗೆ ಅಪ್​​ಡೇಟ್ ಹಂಚಿಕೊಂಡ ವಿಶಾಲ್

Related posts

ಪ್ರಯಾಣಿಕರ ಗಮನಕ್ಕೆ; ನಾಳೆ ಮುಂಜಾನೆ ಬೆಳಿಗ್ಗೆಯಿಂದಲೇ ಮೆಟ್ರೋ ಸೇವೆ ಆರಂಭ..!

Kalpana Editor

ಶೂಟಿಂಗ್ ಲೋಕಕ್ಕೆ ಆಘಾತ: ಮನು ಭಾಕರ್ ಕೋಚ್ ಜಸ್ಪಾಲ್ ರಾಣಾ ನಿಧನ..!

Kalpana Editor

ಮುದ್ದಾದ ಕಂದಮ್ಮನ ಮೇಲೆ ತೆಂಗಿನಕಾಯಿ ಬಿದ್ದು ಮಗು ಸಾವು..!

Kalpana Editor