August 1, 2026
kranthikidi.com
ತಾಜಾಸುದ್ದಿರಾಜ್ಯ

ಇಂದು ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಉತ್ತರ ಕ್ರಿಯಾದಿ ಕಾರ್ಯ – ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ..!

ಹಾಸನ : ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಉತ್ತರ ಕ್ರಿಯಾದಿ ಕಾರ್ಯ ನೆರವೇರಲಿದ್ದು, ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ತಿಥಿ ಕಾರ್ಯ ನಡೆಯಲಿದೆ. ಕುಟುಂಬಸ್ಥರು 11ನೇ ದಿನದ ಕಾರ್ಯಕ್ಕೆ ತಯಾರಿ ಮಾಡಿಕೊಂಡಿದ್ದಾರೆ.

ಇಂದು ಒಕ್ಕಲಿಗ ಸಂಪ್ರದಾಯದ ಮುಳ್ಳುಗೌಡ ಪರಂಪರೆಯಂತೆ ಉತ್ತರ ಕ್ರಿಯಾದಿ ಕಾರ್ಯ ನಡೆಯಲಿದ್ದು, ಇಂದು ಬೆಳಿಗ್ಗೆ 10-30 ಕ್ಕ ಕುಟುಂಬ ಸದಸ್ಯರಿಂದ ಪೂಜೆ ನೆರವೇರಲಿದೆ. ಬಳಿಕ ಬರುವ ಅಭಿಮಾನಿಗಳು, ಬಂಧುಗಳಿಗೆ ಊಟದ ವ್ಯವಸ್ಥೆ ಇರಲಿದೆ. ಸಂಪೂರ್ಣ ಸಸ್ಯಹಾರಿ ಊಟದ ವ್ಯವಸ್ಥೆ ಮಾಡಿ, ಕಾರ್ಯಕ್ಕೆ ಸಿದ್ದತೆ ಮಾಡಲಾಗಿದೆ. ಹೋಳಿಗೆ, ಲಡ್ಡು, ಮೈಸೂರು ಪಾಕ್‌ ಸೇರಿ ಆರು ಬಗೆಯ ಸಿಹಿ ತಿಂಡಿ ಇರಲಿದೆ. ಸುಮಾರು 2 ಸಾವಿರ ಬಾಣಸಿಗರಿಂದ ಭೋಜನ ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಕಾರ್ಯದ ವೇಳೆ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಏಕಕಾಲಕ್ಕೆ 22 ಸಾವಿರ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ತಲಾ 1,800 ಜನರು ಏಕ ಕಾಲದಲ್ಲಿ ಊಟ ಮಾಡಲು 16 ಕೌಂಟರ್ ನಿರ್ಮಾಣ ಮಾಡಲಾಗಿದೆ. ಮಹಿಳೆಯರಿಗೆ 3 ವಿಐಪಿ, ವಿವಿಐಪಿಗಳಿಗೆ 2 ಸೇರಿ 16 ಕೌಂಟರ್ ನಿರ್ಮಾಣ ಮಾಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಇದನ್ನೂ ಓದಿ : ನಗದು, ಚಿನ್ನ ಪತ್ತೆ – ನಿವೃತ್ತ ಬಸ್‌ ಡ್ರೈವರ್‌ ಮನೆಯಲ್ಲಿ ಭಾರೀ ಸಂಪತ್ತು ಕಂಡು ಬೆಚ್ಚಿದ ಪೊಲೀಸ್ರು

Related posts

ಬೆಂಗಳೂರಿಗರೇ ಗಮನಿಸಿ; 60 ದಿನಗಳ ಕಾಲ ಈ ಪ್ರಮುಖ ರಸ್ತೆ ಕ್ಲೋಸ್…!

Kalpana Editor

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲಿಟ್‌ ಶರ್ಮಿಳಾ

Kalpana Editor

ಗುತ್ತಿಗೆದಾರನ ಕಿಡ್ನ್ಯಾಪ್‌; 16 ಲಕ್ಷ ಹಣ, ಚಿನ್ನಾಭರಣ ಕಸಿದು ಗ್ಯಾಂಗ್‌ ಎಸ್ಕೇಪ್‌..!

Kalpana Editor