ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ದೃಷ್ಟಿ ಮಸುಕಾಗುವುದು, ಕಣ್ಣಿನ ಆಯಾಸ, ಡ್ರೈ ಐ, ಕಂಪ್ಯೂಟರ್ ಹಾಗೂ ಮೊಬೈಲ್ ಬಳಕೆಯಿಂದ ಉಂಟಾಗುವ ಡಿಜಿಟಲ್ ಐ ಸ್ಟ್ರೇನ್ ಸಮಸ್ಯೆಗಳು ಹೆಚ್ಚುತ್ತಿವೆ. ಹಲವರು “ಕೆಲವು ಆಹಾರ ತಿಂದರೆ ಕನ್ನಡಕವೇ ಬೇಡ” ಎಂಬ ನಂಬಿಕೆಯಲ್ಲಿ ನೈಸರ್ಗಿಕ ಪರಿಹಾರಗಳನ್ನು ಹುಡುಕುತ್ತಾರೆ. ಕೆಲವು ಪೌಷ್ಟಿಕ ಆಹಾರಗಳು ಕಣ್ಣಿನ ಆರೋಗ್ಯವನ್ನು ಕಾಪಾಡಲು ಮತ್ತು ದೃಷ್ಟಿ ಕುಗ್ಗುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಅದರಲ್ಲಿಯೂ ಕಣ್ಣಿನ ಆರೋಗ್ಯ ಕಾಪಾಡಲು ಅಗಸೆ ಬೀಜ ಮತ್ತು ಕುಂಬಳಕಾಯಿ ಬೀಜ ಇವೆರಡರಲ್ಲಿ ಯಾವುದು ಎಷ್ಟು ಉಪಯುಕ್ತ ಎಂಬುದನ್ನು ತಿಳಿದುಕೊಳ್ಳಿ.
ಕಣ್ಣಿನ ಆರೋಗ್ಯಕ್ಕೆ ಅಗಸೆ ಬೀಜ ಎಷ್ಟು ಉಪಯುಕ್ತ..? – ಅಗಸೆ ಬೀಜಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್, ಫೈಬರ್, ವಿಟಮಿನ್ ಇ ಹಾಗೂ ಲಿಗ್ನಾನ್ಸ್ ನಿಂದ ಸಮೃದ್ಧವಾಗಿವೆ. ಇವು ಕಣ್ಣಿನ ರೆಟಿನಾದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಡ್ರೈ ಐ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಕೆಲವು ಅಧ್ಯಯನಗಳ ಪ್ರಕಾರ, ಒಮೆಗಾ-3 ಕೊಬ್ಬಿನಾಮ್ಲಗಳು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡಿ ಕಣ್ಣೀರಿನ ಗುಣಮಟ್ಟವನ್ನು ಸುಧಾರಿಸಲು ನೆರವಾಗಬಹುದು. ಆದರೆ ಇವು ಕನ್ನಡಕದ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ.

ಕುಂಬಳಕಾಯಿ ಬೀಜಗಳಿಂದ ದೊರೆಯುವ ಪ್ರಯೋಜನಗಳು : ಕುಂಬಳಕಾಯಿ ಬೀಜಗಳಲ್ಲಿ ಜಿಂಕ್, ಮೆಗ್ನೀಷಿಯಂ, ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್ಗಳು ಅಧಿಕವಾಗಿವೆ. ಜಿಂಕ್ ಕಣ್ಣಿನ ರೆಟಿನಾದ ಕಾರ್ಯಕ್ಷಮತೆಗೆ ಮುಖ್ಯವಾದ ಪೋಷಕಾಂಶವಾಗಿದೆ. ಜೊತೆಗೆ ವಯೋಸಹಜ ದೃಷ್ಟಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹ ಸಹಕಾರಿಯಾಗಬಹುದು. ಈ ಬೀಜಗಳನ್ನು ಹುರಿದು ಅಥವಾ ಸಲಾಡ್, ಮೊಸರು, ಸ್ಮೂಥಿ ಹಾಗೂ ಓಟ್ಸ್ ಜೊತೆ ಸೇರಿಸಿ ಸೇವಿಸಬಹುದು.
ಕಣ್ಣಿನ ದೃಷ್ಟಿಗೆ ಸಹಾಯ ಮಾಡುವ ಇನ್ನಿತರ ಆಹಾರಗಳು – ಕೇವಲ ಬೀಜಗಳಷ್ಟೇ ಅಲ್ಲ, ಈ ಆಹಾರಗಳನ್ನೂ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಕ್ಯಾರೆಟ್ (ಬೀಟಾ ಕ್ಯಾರೋಟಿನ್), ಪಾಲಕ್, ಮೆಂತೆ, ಸೊಪ್ಪುಗಳು (ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್), ಮೊಟ್ಟೆ, ಮೀನು (ಸ್ಯಾಲ್ಮನ್, ಸಾರ್ಡಿನ್), ಕಿತ್ತಳೆ, ನಿಂಬೆ (ವಿಟಮಿನ್ ಸಿ), ಬಾದಾಮಿ, ವಾಲ್ನಟ್, ಸಿಹಿ ಗೆಣಸು..,
ದೃಷ್ಟಿ ಮಸುಕಾಗಲು ಕಾರಣಗಳೇನು? – ಸಮೀಪದೃಷ್ಟಿ ಅಥವಾ ದೂರದೃಷ್ಟಿ, ಕಣ್ಣಿನ ಒಣತನ, ಮಧುಮೇಹದಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳು, ಕ್ಯಾಟರಾಕ್ಟ್, ಗ್ಲೂಕೋಮಾ, ಹೆಚ್ಚು ಸಮಯ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ, ದೃಷ್ಟಿ ಹಠಾತ್ ಮಸುಕಾದರೆ ಅಥವಾ ನೋವು, ಕೆಂಪಾಗುವಿಕೆ, ಬೆಳಕಿಗೆ ಅಸಹನೆ ಕಂಡುಬಂದರೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸಬೇಕು.

ಕಣ್ಣಿನ ಆರೋಗ್ಯ ಕಾಪಾಡಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ – ಪ್ರತೀ 20 ನಿಮಿಷಕ್ಕೊಮ್ಮೆ 20-20-20 ನಿಯಮ ಪಾಲಿಸಿ. ದಿನಕ್ಕೆ ಕನಿಷ್ಠ 7–8 ಗಂಟೆಗಳ ನಿದ್ರೆ ಮಾಡಿ. ಸಾಕಷ್ಟು ನೀರು ಕುಡಿಯಿರಿ. ಸೂರ್ಯನ ತೀವ್ರ ಬೆಳಕಿನಲ್ಲಿ ಯುವಿ ರಕ್ಷಣೆ ಇರುವ ಕನ್ನಡಕ ಧರಿಸಿ. ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ.
ಆರೋಗ್ಯಕರ ಆಹಾರವು ಕಣ್ಣಿನ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಆದರೆ ಅಗಸೆ ಬೀಜ ಅಥವಾ ಕುಂಬಳಕಾಯಿ ಬೀಜ ತಿಂದರೆ ಕನ್ನಡಕದ ಅಗತ್ಯವೇ ಇಲ್ಲ ಎಂಬ ಮಾತಿಗೆ ವೈಜ್ಞಾನಿಕ ಆಧಾರವಿಲ್ಲ. ಸರಿಯಾದ ಪೌಷ್ಟಿಕ ಆಹಾರ, ನಿಯಮಿತ ಕಣ್ಣಿನ ಪರೀಕ್ಷೆ ಮತ್ತು ಆರೋಗ್ಯಕರ ಜೀವನಶೈಲಿಯೇ ಉತ್ತಮ ದೃಷ್ಟಿ ಕಾಪಾಡುವ ನಿಜವಾದ ಮಾರ್ಗವಾಗಿದೆ. ಆರೋಗ್ಯ ಜಾಗೃತಿಗಾಗಿ ಮಾತ್ರ. ಕಣ್ಣಿನ ದೃಷ್ಟಿ ಮಸುಕಾಗುವುದು, ಕಣ್ಣಿನ ನೋವು ಅಥವಾ ಇತರ ಸಮಸ್ಯೆಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡದೇ ನೇತ್ರ ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯವಾಗಿದೆ. ಇದನ್ನೂ ಓದಿ : ತಾರಕಕ್ಕೇರಿದ ಬಿಡದಿ ಭೂಯುದ್ಧ – ಬಿಜೆಪಿ ಬಿಟ್ಟು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ..!
