ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆಯಲ್ಲಿ ಈ ರೀತಿ ಎಸ್ಐಆರ್ ಮಾಡುತ್ತಿದ್ದಾರೆ. ಮನೆ ಮನೆಗೆ ಭೇಟಿ ಕೊಡದೆ, ಒಂದು ಜಾಗದಲ್ಲಿ ಕುಳಿತುಕೊಂಡು ಫಾರಂ ಅನ್ನು ಇಶ್ಯೂ ಮಾಡಿ ನಂತರ ಸರ್ವೆ ಕಂಪ್ಲೀಟ್ ಆಗಿದೆ ಎಂದು ಸ್ಟಿಕ್ಕರ್ ಸಹ ಕೊಡುತ್ತಿದ್ದಾರೆ. ಹಾಗೆ ಮತದಾರರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಯಶವಂತಪುರ ಕ್ಷೇತ್ರದ ಶಾಸಕರ ಫೋಟೋ ಇರುವ ಬುಕ್ಕನ್ನು ಉಪಯೋಗಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದು ಸರಿಯಾದ ಪ್ರಕ್ರಿಯೆ ಅಲ್ಲ ದಯಮಾಡಿ ಯಶವಂತಪುರ ಜನತೆ ಹಾಗೂ ಕಾರ್ಯಕರ್ತರುಗಳು ಎಚ್ಚರದಿಂದ ಇರಬೇಕು. ಈ ರೀತಿ ಎಸ್ಐಆರ್ ಮಾಡಿದರೆ, ಅಕ್ರಮ ಮತದಾರರನ್ನು ತಡೆಗಟ್ಟಲು ಆಗುವುದಿಲ್ಲ. ದಯಮಾಡಿ ಪಕ್ಷದ ಅಧ್ಯಕ್ಷರು ಹಾಗೂ ಹೋಬಳಿಯ ಮುಖಂಡರುಗಳು, ಹೋಬಳಿ ಅಧ್ಯಕ್ಷರು, ಕಾರ್ಯಕರ್ತರು ಇದರ ಬಗ್ಗೆ ನಿಗಾವಹಿಸಬೇಕು ಹಾಗೂ ಎಚ್ಚರದಿಂದಿರಬೇಕು. ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಇದನ್ನೂ ಓದಿ : ಮುಸ್ಲಿಂ ಧರ್ಮಗುರುಗಳಿಗೆ ಅವಮಾನ ಆರೋಪ – ಪುನೀತ್ ಕೆರೆಹಳ್ಳಿ ಅರೆಸ್ಟ್..!
