ರಾಮನಗರ : ಇಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅವರ ಮನೆ ದೇವರಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಕೆಂಕೆರಮ್ಮ ದೇವಿಗೆ ಅಭಿಷೇಕ ನೆರವೇರುತ್ತಿದೆ.
ಡಿಕೆಶಿಗೆ ಒಳಿತಾಗಲಿ, ರಾಜ್ಯದ ಮುಖ್ಯಮಂತ್ರಿ ಆಗಿ ಉತ್ತಮ ರೀತಿಯ ಆಡಳಿತ ನೀಡಲಿ ಎಂದು ದೇವಾಲಯದ ಸಮಿತಿಯಿಂದ ಪ್ರಾರ್ಥಿಸಲಾಗಿದೆ. ಇದನ್ನೂ ಓದಿ : ಇಂದು ಸಚಿವರ ಪಟ್ಟಿ ಪ್ರಕಟ; ಬೇರೆ ದಿನ ಕಾಂಗ್ರೆಸ್ ಭವನ ಶಂಕುಸ್ಥಾಪನೆ – ಡಿ.ಕೆ. ಶಿವಕುಮಾರ್
ಕೆಂಕೆರಮ್ಮಗೆ ವಿಶೇಷ ಪೂಜೆ ವೇಳೆ ಬಲಗಡೆ ಹೂ ಪ್ರಸಾದವಾಗಿದೆ. ಪೂಜೆ ಬಳಿಕ ಡಿಕೆಶಿ ಅಭಿಮಾನಿಗಳಿಂದ ಪ್ರಸಾದ ವಿತರಣೆ ನಡೆಯಿತು.
