August 1, 2026
kranthikidi.com
ಉದ್ಯೋಗತಾಜಾಸುದ್ದಿ

ಕೆಪಿಎಸ್‌ಸಿ ನೇಮಕಾತಿ; 2024ನೇ ಸಾಲಿನ ಈ ಹುದ್ದೆಗಳಿಗೆ ಅರ್ಜಿ ಹಾಕಿರುವವರಿಗೆ ಮಹತ್ವದ ಸೂಚನೆ..!

ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನಲ್ಲಿ ಅಧಿಸೂಚಿಸಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧ, ಸದರಿ ಹುದ್ದೆಗಳಿಗೆ ಅರ್ಜಿ ಹಾಕಿರುವವರಿಗೆ ಮಹತ್ವದ ಸೂಚನೆಯನ್ನು ಪ್ರಕಟಿಸಿದೆ. ಈ ಕೆಳಕಂಡ ಅಧಿಸೂಚನೆಗಳ ಹುದ್ದೆಗಳಿಗೆ ನೇಮಕ ಪರೀಕ್ಷೆಯ ಭಾಗವಾದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತು ಯಾವುದೇ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದೇ ಕೇವಲ ಕೆಪಿಎಸ್‌ಸಿ ನೇಮಕಾತಿ ಪೋರ್ಟಲ್‌ನಲ್ಲಿ ಒನ್ ಟೈಮ್ ರಿಜಿಸ್ಟ್ರೇಷನ್‌ ಪಡೆದಿರುವ ಅಭ್ಯರ್ಥಿಗಳು ಸಹ ಕೆಪಿಎಸ್‌ಸಿ’ಯ ಅಭ್ಯರ್ಥಿ ಲಾಗಿನ್‌ನಲ್ಲಿ ಹೋಗಿ ವೈಯಕ್ತಿಕ ವಿವರಗಳ ಅಡಿಯಲ್ಲಿನ ಕನ್ನಡ ಭಾಷಾ ಪರೀಕ್ಷೆಯ ಟ್ಯಾಬ್ ನಲ್ಲಿ ಮತ್ತೊಮ್ಮೆ ಕನ್ನಡ ಭಾಷೆಯ ವಿವರಗಳನ್ನು ಕಡ್ಡಾಯವಾಗಿ ನವೀಕರಿಸಲು ಸೂಚನೆ ನೀಡಿದೆ.

ಅದಕ್ಕೆ ಕೊನೆ ದಿನಾಂಕವನ್ನು ಸಹ ಈ ಕೆಳಗಿನಂತೆ ನಿಗದಿ ಮಾಡಿದೆ. ಕನ್ನಡ ಭಾಷೆಯ ವಿವರಗಳನ್ನು ನೀಡುವ ವಿಧಾನ – ಕೆಪಿಎಸ್‌ಸಿ ಅಭ್ಯರ್ಥಿ ಲಾಗಿನ್‌ ಪೋರ್ಟಲ್‌ https://kpsconline.karnataka.gov.in/login/login ಗೆ ಭೇಟಿ ನೀಡಿ. ಓಪನ್‌ ಆದ ಪೇಜ್‌ನಲ್ಲಿ ರಿಜಿಸ್ಟ್ರೇಷನ್‌ ನಂಬರ್ / ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗಿ. ವೈಯಕ್ತಿಕ ವಿವರಗಳ ಟ್ಯಾಬ್‌ ಆಯ್ಕೆ ಮಾಡಿ. ನಂತರ ಕನ್ನಡ ಭಾಷಾ ಪರೀಕ್ಷೆಯ ಟ್ಯಾಬ್‌ ಆಯ್ಕೆ ಮಾಡಿ. ಕನ್ನಡ ಭಾಷೆಯ ವಿವರಗಳನ್ನು ನೀಡಿ. ಸಬ್ಮಿಟ್‌ ಮಾಡಿ.

ಈಗಲೇ ಈ ಕೆಳಗಿನಂ ಎಲ್ಲ ಹುದ್ದೆಗಳಿಗೆ ಅರ್ಜಿ ಹಾಕಿರುವವರು ಕನ್ನಡ ಭಾಷೆಯ ವಿವರಗಳನ್ನು ನಮೂದಿಸಬೇಕು ಎಂದು ಸೂಚಿಸಲಾಗಿದೆ. ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ (ಆರ್‌ಪಿಸಿ) ಹುದ್ದೆಗಳು : 672., ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ( ಹೈದೆರಾಬಾದ್ ಕರ್ನಾಟಕ ) ಹುದ್ದೆಗಳು : 273., ಪದವಿ ಮಟ್ಟದ ಗ್ರೂಪ್‌ ಸಿ ಹುದ್ದೆಗಳು (ಹೈದೆರಾಬಾದ್ ಕರ್ನಾಟಕ ) : 16., ಪದವಿ ಮಟ್ಟದ ಗ್ರೂಪ್‌ ಸಿ ಹುದ್ದೆಗಳು ( ಉಳಿಕೆ ಮೂಲ ವೃಂದ ): 60..,

ಕೆಪಿಎಸ್‌ಸಿ’ಯ ಈ ಸೂಚನೆ ಏಕೆ? – ಕರ್ನಾಟಕದ ಯಾವುದೇ ಸರ್ಕಾರಿ ಹುದ್ದೆಗೆ ನೇರ ನೇಮಕಾತಿ ಮಾಡುತ್ತಿದ್ದಲ್ಲಿ, ಅಂತಹ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕಡ್ಡಾಯವಾಗಿರುತ್ತದೆ, ಇದರ ಭಾಗವಾಗಿ ಕನ್ನಡ ಭಾಷಾ ಪತ್ರಿಕೆಯು ಇರುತ್ತದೆ. ಆದರೆ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಥವಾ ರಾಜ್ಯ ಸರ್ಕಾರವು ಅದಕ್ಕೆ ತತ್ಸಮಾನವೆಂದು ಘೋಷಿಸಿದ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್‌ಎಸ್‌ಎಲ್‌ಸಿ ಗಿಂತ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಸಿಸಿದ್ದರೆ, ಅಥವಾ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಇಂತಹ ಪರೀಕ್ಷೆಗಳನ್ನು ಪಾಸು ಮಾಡಿದ್ದರೆ ಅಥವಾ ಆಯೋಗ ಅಥವಾ ಇನ್ನಿತರೆ ಯಾವುದೇ ಆಯ್ಕೆ ಪ್ರಾಧಿಕಾರವು ಈ ಹಿಂದೆ ನಡೆಸಿದ ಕನ್ನಡ ಭಾಷೆಯ ಪರೀಕ್ಷೆಯಲ್ಲಿ (ಕಡ್ಡಾಯ ಕನ್ನಡ ಪರೀಕ್ಷೆ) ಉತ್ತೀರ್ಣರಾಗಿದ್ದರೆ ಅಂತಹ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.

ಆದ್ದರಿಂದ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಹಾಕಿರುವವರಿಗೆ ಮತ್ತು ಒಟಿಆರ್ ರಿಜಿಸ್ಟ್ರೇಷನ್‌ ಪಡೆದಿರುವವರಿಗೆ ಕನ್ನಡ ಭಾಷಾ ಪರೀಕ್ಷೆ ವಿನಾಯಿತಿ ನೀಡುವ ಸಲುವಾಗಿ ಹಾಗೂ ಅರ್ಹರಲ್ಲದವರಿಗೆ ಪರೀಕ್ಷೆ ನಡೆಸುವ ಸಲುವಾಗಿ ವಿವರಗಳನ್ನು ನವೀಕರಿಸಲು ಸೂಚಿಸಿದೆ.

Related posts

ಸುಲಭ ರೀತಿಯಲ್ಲಿ ಹೋಟೆಲ್ ಶೈಲಿಯ ಮೇಥಿ ಪನ್ನೀರ್ ಕರಿ

Kalpana Editor

ರಾಜ್ಯಸಭೆ ಚುನಾವಣೆ ಚರ್ಚೆಗೆ ಸಿಎಂ ದೆಹಲಿಗೆ; ಸಚಿವ ಈಶ್ವರ ಖಂಡ್ರೆ

Kalpana Editor

ಕಾಲುವೆ ನೀರು ನುಗ್ಗಿ ಬೆಳೆಗಳು ಹಾನಿ – ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ..!

Kalpana Editor