August 1, 2026
kranthikidi.com
ತಾಜಾಸುದ್ದಿಸಿನಿಮಾ

ಬ್ರಾಹ್ಮಿ ಮುಹೂರ್ತದಲ್ಲಿ ʻರಾಮಾಯಣʼ ಟ್ರೈಲರ್ ರಿಲೀಸ್‌ – ರಾವಣನಾಗಿ ಅಬ್ಬರಿಸಿದ ನಟ ಯಶ್‌

ಭಾರತೀಯ ಸಿನಿ ರಂಗದ ಬಹುನಿರೀಕ್ಷಿತ ಪೌರಾಣಿಕ ಕಥೆಯ ಸಿನಿಮಾ ʻರಾಮಾಯಣʼದ ಮೊದಲ ಟ್ರೈಲರ್‌ ಇಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ರಿಲೀಸ್‌ ಆಗಿದೆ. ರಾವಣನಾಗಿ ಕನ್ನಡದ ನಟ ರಾಕಿಂಗ್‌ ಸ್ಟಾರ್‌ ಯಶ್‌, ರಾಮನಾಗಿ ರಣಬೀರ್ ಕಪೂರ್ ಅಬ್ಬರಿಸಿದ್ದಾರೆ. ನಟಿ ಸಾಯಿ ಪಲ್ಲವಿ ಸೀತೆಯಾಗಿ ಮನಗೆದ್ದಿದ್ದು, ಹಾನ್ಸ್ ಜಿಮ್ಮರ್–ಎ.ಆರ್. ರೆಹಮಾನ್ ಸಂಗೀತ ಮತ್ತು ಭವ್ಯ VFX ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಬಹುನಿರೀಕ್ಷಿತ ಈ ಚಿತ್ರವು ಹಲವು ತಿಂಗಳಿಂದ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಜುಲೈ 30 ರಂದು ಚಿತ್ರದ ಅದ್ಧೂರಿ ಟ್ರೈಲರ್ ಅನಾವರಣಗೊಂಡಿದ್ದು, ಸೂರ್ಯೋದಕ್ಕೂ ಮುನ್ನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್‌ ಕೊಟ್ಟ ಸಿನಿ ತಂಡವಾಗಿದೆ.

ಇಂದು ಬೆಳಗ್ಗೆ 4.15 ರ ಬ್ರಾಹ್ಮಿ ಮುಹೂರ್ತದಲ್ಲಿ ನಿರ್ಮಾಣ ಸಂಸ್ಥೆ ಟ್ರೈಲರ್ ಬಿಡುಗಡೆ ಮಾಡಿದೆ. ʻThe Ramayana Trailer, This is where the EPIC BEGINSʼ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾದ ಟ್ರೈಲರ್ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಸುಮಾರು 4 ನಿಮಿಷ 10 ಸೆಕೆಂಡುಗಳ ಅವಧಿಯ ಈ ಟ್ರೈಲರ್‌ನಲ್ಲಿ ಧರ್ಮ ಮತ್ತು ಅಧರ್ಮದ ನಡುವಿನ ಮಹಾಯುದ್ಧವನ್ನ ಅದ್ಭುತ ದೃಶ್ಯ ವೈಭವದೊಂದಿಗೆ ಕಟ್ಟಿಕೊಡಲಾಗಿದೆ. ಅತ್ಯದ್ಭುತ ವಿಎಫ್‌ಎಕ್ಸ್‌ ಹಾಗೂ ಯುದ್ಧದ ಭವ್ಯ ದೃಶಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.

ಟ್ರೈಲರ್ ಆರಂಭದಲ್ಲೇ ರಾವಣನಾಗಿ ಯಶ್ ಕಾಣಿಸಿಕೊಂಡಿದ್ದು, ಸಿಂಹಾಸನ ತನ್ನದಾಗಿಸಿಕೊಳ್ಳುವ ಅವರ ಭವ್ಯ ಪ್ರವೇಶ ಸಖತ್‌ ಥ್ರಿಲ್‌ ಆಗಿದೆ. ಚಿನ್ನದ ಕವಚ, ಅದ್ಧೂರಿ ವೇಷಭೂಷಣ ಹಾಗೂ ಭಯಾನಕ ಅಭಿವ್ಯಕ್ತಿಗಳೊಂದಿಗೆ ಯಶ್ ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡಿರೋದು ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಅಯೋಧ್ಯೆಯ ಸುಂದರ ದೃಶ್ಯಗಳ ನಡುವೆ ಸರಳ ಕೇಸರಿ ವಸ್ತ್ರ ಧರಿಸಿರುವ ರಣಬೀರ್ ಕಪೂರ್ ಶ್ರೀರಾಮನಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ. ಬಳಿಕ ಧರ್ಮಕ್ಕಾಗಿ ಹೋರಾಡುವ ಯೋಧನಾಗಿ ಅವರ ಪಾತ್ರ ರೂಪುಗೊಳ್ಳುತ್ತದೆ.

ಇದರೊಂದಿಗೆ ಸಾಯಿ ಪಲ್ಲವಿ, ಸೀತೆ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ರಾಮ-ಸೀತೆಯ ಮನಮುಟ್ಟುವ ಕ್ಷಣಗಳ ಜೊತೆಗೆ, ವನವಾಸದ ಪಯಣ ಮತ್ತು ಲಕ್ಷ್ಮಣನಾಗಿ ರವಿ ದುಬೆ ಅವರ ಪಾತ್ರವೂ ಟ್ರೈಲರ್‌ನಲ್ಲಿ ಪ್ರಮುಖವಾಗಿ ಮೂಡಿಬಂದಿದೆ. ಟ್ರೈಲರ್‌ನಲ್ಲಿ ಚಿನ್ನದ ಲಂಕೆಯ ವೈಭವ, ಬೃಹತ್ ಸೇನೆಗಳು, ದೈತ್ಯ ರಾಕ್ಷಸರು ಹಾಗೂ ಪೌರಾಣಿಕ ಜೀವಿಗಳನ್ನ ಅದ್ಭುತ ವಿಎಫ್‌ಎಕ್ಸ್‌ ಮೂಲಕ ತೆರೆಗೆ ತಂದಿರೋದು ವಿಶೇಷವಾಗಿದೆ. ಕಥೆಯ ಪ್ರಮುಖ ಘಟ್ಟಗಳನ್ನ ಮಾತ್ರ ತೋರಿಸಿರುವ ಚಿತ್ರತಂಡ, ಚಿತ್ರದ ಕಥೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸದೇ ಸಸ್ಪೆನ್ಸ್‌ಗಳನ್ನ ಹಾಗೆಯೇ ಉಳಿಸಿಕೊಂಡಿದೆ.

ಆಸ್ಕರ್ ಪ್ರಶಸ್ತಿ ವಿಜೇತರಾದ ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಸಂಗೀತಕ್ಕೆ ಫ್ಯಾನ್ಸ್‌ ತಲೆದೂಗಿದ್ದಾರೆ. ಒಟ್ಟಿನಲ್ಲಿ ಸುಮಾರು 4,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಹಾಗೂ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ಪೌರಾಣಿಕ ಚಿತ್ರಗಳ ನಿರೂಪಣೆಗೆ ಹೊಸ ಆಯಾಮ ನೀಡುವ ಈ ಸಿನಿಮಾ, ದೀಪಾವಳಿ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ : ʼನೀವು ನಿಷ್ಪ್ರಯೋಜಕರುʼ – ಸಿಜೆಪಿ ವಕ್ತಾರ ಸೌರವ್ ದಾಸ್ ಟೀಕೆಗೆ ಕಂಗನಾ ಕಿಡಿ

Related posts

ಎಸ್​ಐಆರ್​​ ತನಿಖೆಗೆ ಆಗ್ರಹ; ಕೇಂದ್ರ ಚುನಾವಣಾ ಆಯೋಗಕ್ಕೆ ಶೋಭಾ ಪತ್ರ

Kalpana Editor

ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ದೆಹಲಿ ವಿದ್ಯಾರ್ಥಿಗಳ ಪರ ನಿಂತ ನಟಿ ಆಲಿಯಾ ಭಟ್..!

Kalpana Editor

ಗೌಡರಿಗಾಗಿ ಊಟ ಮಾಡದೇ ಕಾಯುತ್ತಿದ್ರು – ಅತ್ತೆ ನೆನೆದು ಅಳಿಯ ಭಾವುಕ..!

Kalpana Editor