July 11, 2026
kranthikidi.com
ತಾಜಾಸುದ್ದಿವಿದೇಶ

ಖಮೇನಿ ಅಂತ್ಯಕ್ರಿಯೆಗೂ ಮುನ್ನವೇ ಇರಾನ್‌ ಮೇಲೆ ವಿನಾಶಕಾರಿ ದಾಳಿ; ಇನ್ನೂ ಪರಿಸ್ಥಿತಿ ಕೆಟ್ಟದಾಗಿರಲಿದೆ – ಟ್ರಂಪ್‌

ವಾಷಿಂಗ್ಟನ್/ಟೆಹ್ರಾನ್‌ : ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯ ಕನಸು ಕಾಣುತ್ತಿದ್ದ ವಿಶ್ವಶಾಂತಿ ಪ್ರಿಯರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಿಗ್‌ ಶಾಕ್‌ ಕೊಟ್ಟಿದ್ದಾರೆ. ಹಾರ್ಮುಜ್‌ ದಾಳಿಗೆ ಪ್ರತೀಕಾರವಾಗಿ ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಭೀಕರ ದಾಳಿ ನಡೆಸಿದ್ದ ಅಮೆರಿಕ ಪಡೆಗಳು ಇಂದು ಮತ್ತೊಂದು ಸುತ್ತಿನ ದಾಳಿ ನಡೆಸಿವೆ.

ಹಾರ್ಮುಜ್‌ ಜಲಸಂಧಿಯಲ್ಲಿ ಅಮೆರಿಕ ಪಡೆಗಳಿಗೆ ಬೆದರಿಕೆಯೊಡ್ಡುವ ಇರಾನ್‌ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಲು ಅಮೆರಿಕ ಸೇನೆಯು ಇರಾನ್‌ ವಿರುದ್ಧ ಹೊಸ ಮಿಲಿಟರಿ ದಾಳಿ ಪ್ರಾರಂಭಿಸಿದೆ. ಇರಾನ್‌ ಜೊತಗಿನ ಕದನ ವಿರಾಮನ ಅಂತ್ಯಗೊಂಡಿದೆ ಎಂದು ಟ್ರಂಪ್‌ ಹೇಳಿದ ಮರು ದಿನ ಘಟನೆ ಸಂಭವಿಸಿದೆ. ಬಂದರ್ ಅಬ್ಬಾಸ್ ಮತ್ತು ಸಿರಿಕ್ ಸೇರಿದಂತೆ ಇರಾನ್‌ನ ಹಲವಾರು ಪ್ರದೇಶಗಳನ್ನ ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದೆ.

ಬಂದರ್ ಅಬ್ಬಾಸ್ ಮತ್ತು ಸಿರಿಕ್‌ ಪ್ರದೇಶಗಳಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿವೆ. ಇರಾನ್‌ ಮೇಲಿನ ದಾಳಿಯಲ್ಲಿ ಇಬ್ಬರು ಮೀನುಗಾರರೂ ಸಾವನ್ನಪ್ಪಿದ್ದಾರೆ ಎಂದು ಇರಾನ್‌ ಮಾಧ್ಯಮಗಳು ಖಚಿತಪಡಿಸಿವೆ. ಚಾಬಹಾರ್ ಮತ್ತು ಕೊನಾರಕ್‌ ಬಳಿಯೂ ಜೋರಾಗಿ ಸ್ಫೋಟಗಳು ಕೇಳಿಬಂದಿದೆ, ಅಕ್ಕಾಲಾದಲ್ಲಿ ರೈಲ್ವೆ ಸೇತುವೆ ಸ್ಫೋಟಗೊಂಡಿದೆ. ದಾಳಿ ಬಳಿಕ ಚಾಬಹಾರ್‌ನ ಕೆಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಶಾಹಿದ್ ಬೆಹೆಶ್ಟಿ ಬಂದರು, ಕಲಾಂತರಿ ಬಂದರು ಮತ್ತು ಸಮುದ್ರ ಸಂಚಾರ ನಿಯಂತ್ರಣ ಗೋಪುರಕ್ಕೂ ಹಾನಿಯನ್ನುಂಟಾಗಿದ್ದು, ಪ್ರತೀಕಾರಕ್ಕೆ ಇರಾನ್ ವಾಯು ರಕ್ಷಣಾ ವ್ಯವಸ್ಥೆಯನ್ನ ಸಕ್ರಿಯಗೊಳಿಸಿದೆ ಎನ್ನಲಾಗಿದೆ.

ಇರಾನ್‌ನ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ಅಬು ಮೂಸಾ ದ್ವೀಪದಲ್ಲಿ ಒಟ್ಟು 10 ಸ್ಫೋಟಗಳು ಸಂಭವಿಸಿವೆ. ಚಾಬಹಾರ್ ಮತ್ತು ಕೊನಾರಕ್‌ನಲ್ಲಿಯೂ ಹತ್ತು ಸ್ಫೋಟಗಳು ಸಂಭವಿಸಿವೆ. ಈ ವೇಳೆ ಅಗ್ನಿಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದು ಕಂಡುಬಂದಿದೆ. ಈ ಫೋಟೋವನ್ನ ಖುದ್ದು ಅಮೆರಿಕ ಅದ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಟ್ರುತ್‌ ಸೋಷಿಯಲ್‌ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ʻನಿನ್ನೆ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಇದು ಪ್ರತಿಕ್ರಿಯೆ. ಅಂತಹ ಕ್ರಮ ಮತ್ತೆ ಸಂಭವಿಸಿದಲ್ಲಿ, ಪ್ರತಿಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ. ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಯುಎಸ್ ಸೆಂಟ್ರಲ್ ಕಮಾಂಡ್, ಸೆಂಟ್ರಲ್‌ ಕಮಾಂಡರ್‌ ಮುಖ್ಯಸ್ಥರ ನಿರ್ದೇಶನದ ಮೇರೆಗೆ ಇರಾನ್‌ ಸಾಮರ್ಥ್ಯವನ್ನು ಕುಗ್ಗಿಸಲು ಇರಾನ್‌ ವಿರುದ್ಧ ದಾಳಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ : ಬಫರ್ ರಸ್ತೆ ಮತ್ತು ರಾಜಕಾಲುವೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ – ಡಿ.ಎಸ್. ರಮೇಶ್

Related posts

ಡಿಕೆಶಿ ಪಟ್ಟಾಭಿಷೇಕಕ್ಕೆ ರಾಮನಗರದಿಂದ 40 ರಿಂದ 50 ಸಾವಿರ ಜನ..!

Kalpana Editor

ಅಯೋಧ್ಯೆ, ಬದರಿನಾಥ ಬಳಿಕ ಬಾಗಲಾಮುಖಿ ದೇವಾಲಯದಲ್ಲೂ ಕಾಣಿಕೆ ದುರ್ಬಳಕೆ ಆರೋಪ..!

Kalpana Editor

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ: ಈಶ್ವರ ಖಂಡ್ರೆ

Kalpana Editor